ನಳೀಲು: ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಹಾಗೂ ಕಾರಣಿಕ ಕ್ಷೇತ್ರ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ.
ನಾಗರ ಪಂಚಮಿ ಅಂಗವಾಗಿ (ಆ-09) ರಂದು ನಾಗದೇವರಿಗೆ ಹಾಲಿನ ಅಭಿಷೇಕ, ಸೀಯಾಳ ಅಭಿಷೇಕ ಹಾಗೂ ನಾಗತಂಬಿಲ ನಡೆಯಿತು.
ನಾಗಸನ್ನಿಧಿಯಲ್ಲಿ ಅರ್ಚಕರಾದ ಸರ್ವೇಶ್ ಹೆಬ್ಬಾರ್ ಅವರು ವೈದಿಕತ್ವದಲ್ಲಿ ಅಭಿಷೇಕ ಹಾಗೂ ನಾಗತಂಬಿಲ ನಡೆಯಿತು.
ಬಳಿಕ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಪೂಜೆ ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
0 ಕಾಮೆಂಟ್ಗಳು