HEADLINES

ಬೈಕ್ - ಪಿಕಪ್ ನಡುವೆ ಡಿಕ್ಕಿ, ಕ್ಷೌರಿಕ ಸುರೇಶ್ ಮೃತ್ಯು


ಕಾವು:- ಇಂದು 18/8/2024 ರ ಬೆಳಿಗ್ಗೆ ಕಾವು ಸಮೀಪ ಬೈಕ್ ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ್ದು ಅಮ್ಚಿನಡ್ಕದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದ ಸುರೇಶ್ ಭಂಡಾರಿ ಮೃತ ಪಟ್ಟಿದ್ದಾರೆ.

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಎಂಬಲ್ಲಿ ಇಂದು ಬೆಳಿಗ್ಗೆ  ಬೈಕ್‌ ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತ ಪಟ್ಟಿದ್ದಾರೆ. 

ಮೃತರನ್ನು ಮಾಡ್ನೂರು ಗ್ರಾಮದ ಕಾವು ಬಜಕುಡೇಲು ದಿ. ರಾಮ ಭಂಡಾರಿ ಎಂಬವರ ಪುತ್ರ ಸುರೇಶ್ ಎಂದು ತಿಳಿದು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು