ಕೌಡಿಚ್ಚಾರಿನ ಮಣ್ಣಾಪು ಎಂಬಲ್ಲಿ ಕಾಡು ಹಂದಿ ದಾಳಿಗೆ ಧನುಷ್ ಎಂಬವರು ಗಾಯಗೊಂಡಿದ್ದಾರೆ.
ಧನುಷ್ ಎಂಬವರು ಕುಂಬ್ರ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅವರು ಎಂದಿನಂತೆ ಮನೆಯಿಂದ ಕೌಡಿಚ್ಚಾರು ಕಡೆಗೆ ಬರುತ್ತಿದ್ದರು.
ಈ ವೇಳೆ ಇಂದು ಬೆಳಗ್ಗೆ ಅ 20 ರಂದು ಏಕಾಏಕಿ ಕಾಡು ಹಂದಿಯೊಂದು ದಾಳಿ ಮಾಡಿದ್ದು ಧನುಷ್ ಗಾಯಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರ ಸಹಕಾರದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
0 ಕಾಮೆಂಟ್ಗಳು