ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ

 


 ನಾಗಮಂಗಲ:-  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕು ಮಟ್ಟದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಕಾರ್ಯಕ್ರಮವನ್ನು ಶ್ರೀ ಹನುಮಂತಯ್ಯ ಕೋಣನೂರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು,  ಪೂಜ್ಯ ಡಾ" ಡಿ. ವೀರೇಂದ್ರ ಹೆಗ್ಗಡೆ ಯವರು ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸ್ವಸಹಾಯ ಸಂಘದ ಸದ್ಯಸರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಪಡೆಯುವ ಮಕ್ಕಳಿಗೆ  ಸುಜ್ಞಾನ ನಿಧಿ ಶಿಷ್ಯವೇತನವನ್ನು ಮಾಸಿಕವಾಗಿ ಪಾವತಿಸಲಾಗುತ್ತದೆ  ಒಬ್ಬ ಸಾಮಾನ್ಯ ಬಡ ಕುಟುಂಬದಿಂದ ಬಂದ ವಿದ್ಯಾರ್ಥಿಯು ಕೂಡ ಡಾಕ್ಟರ್, ಇಂಜಿನಿಯರ್, ನರ್ಸಿಂಗ್, ಪ್ಯಾರಾಮೆಡಿಕಲ್ ಸೈನ್ಸ್, ಐಟಿಐ, ಡಿಪ್ಲೋಮೋ, ಅಂತಹ ಉನ್ನತ ಶಿಕ್ಷಣವನ್ನು ಪಡೆಯುವ ಮಕ್ಕಳಿಗೆ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ನಾಗಮಂಗಲ ತಾಲೂಕಿನಲ್ಲಿ 140 ಮಕ್ಕಳಿಗೆ ಶಿಷ್ಯವೇತನ  ಮಂಜೂರಾತಿ ಆಗಿದೆ ಎಂದು ಜಿಲ್ಲಾ ನಿರ್ದೇಶಕರು ಆದ  ಶ್ರೀಮತಿ ಚೇತನ ಎಂ ರವರು ತಿಳಿಸಿದರು ಹಾಗೂ ಮಂಜೂರಾತಿ ಪತ್ರ ವಿತರಣೆ ಮಾಡಿದರು , ಮುಖ್ಯ ಅತಿಥಿಗಳಾದ ಪದ್ಮನಾಭ  (ಪಾಪಣ್ಣ ) ರವರು ಶ್ರೀ ಕ್ಷೇತ್ರದ ಕಾರ್ಯಕ್ರಮವು ರಾಜ್ಯದಾದ್ಯಂತ  ಹಬ್ಬಿರುವಂತಹ ಕಾರ್ಯಕ್ರಮ  ಪೂಜ್ಯ ರು ಕಾರ್ಯಕ್ರಮಗಳನ್ನು ಮನೆ ಮನೆ ಬಾಗಿಲಿಗೆ ತಲುಪಿಸಿದರೆ ಯಾವುದೇ ಜಾತಿ, ಧರ್ಮ ನೋಡದೆ ಧರ್ಮಸ್ಥಳ ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿಸಿದರು, ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ದಿವಾಕರ್, ಮೇಲ್ವಿಚಾರಕರಾದ ಕಾರ್ತಿಕ್, ನಿಶಾಂತ್, ಸೇವಾಪ್ರತಿನಿಧಿಗಳು ಹಾಗೂ ಪಲಾನುಭವಿ ವಿದ್ಯಾರ್ಥಿ ವಿದ್ಯಾರ್ಥಿನಿಯರು , ಹಾಗೂ ಪೋಷಕರು   ಉಪಸ್ಥಿತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು